
ಮಂಗಳೂರು: ಮಂಗಳೂರಿನಿಂದ ಕುಂಪಲಗೆ ಸಂಚರಿಸುತ್ತಿದ್ದ ಸರಕಾರಿ ಬಸ್ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಘಟನೆ ನಗರದ ಹೊರವಲಯ ಕುಂಪಲದಲ್ಲಿ ನಡೆದಿದೆ. ಬೈಪಾಸ್ ನಿಂದ ಕುಂಪಲ ತನಕ ಸುಮಾರು 2 ಕಿಮೀ ರಸ್ತೆ ದುರಸ್ತಿ ಮಾಡಿ ಕೆಲವು ದಶಕಗಳಾಗಿವೆ. ನಂತರದ ದಿನದಲ್ಲಿ ಚುನಾವಣೆ ಹತ್ತಿರವಾದಾಗ ಆಶ್ವಾಸನೆ ದೊರೆಯುತ್ತಿದೆ ಅಷ್ಟೆ. ಹೊರತುಪಡಿಸಿ ಈವರೆಗೆ ರಸ್ತೆ ದುರಸ್ತಿಯಾಗಿಲ್ಲ, ಇದು ಕಿರಿದಾದ ರಸ್ತೆಯಾಗಿದ್ದು ಜಲ್ಲಿ ಮೇಲೆದ್ದಿರುವುದರಿಂದ ನಿತ್ಯವು ಸಂಚಾರಕ್ಕೆ ಹರಸಾಹಸ ಪಡಬೇಕಿದೆ.














