ಆ. 23ರಂದು ಬೆಂಗಳೂರಿನಲ್ಲಿ ಧರ್ಮ ಕ್ಷೇತ್ರ ಉಳಿಸೋಣ ಎಂಬ ಜನಜಾಗೃತಿ ಕಾರ್ಯಕ್ರಮ –ಕಹಳೆ ನ್ಯೂಸ್

ಬೆಂಗಳೂರು : ಸುಮನಾ ಫೌಂಡೇಶನ್ ರಿ. ವತಿಯಿಂದ ಧರ್ಮ ಕ್ಷೇತ್ರ ಉಳಿಸೋಣ ಎಂಬ ಕಾರ್ಯಕ್ರಮವು ಇದೇ ಬರುವ ಆಗಸ್ಟ್ 23ರಂದು ಸಂಜೆ 5.30ಕ್ಕೆ ಬೆಂಗಳೂರಿನ ಸಂಜಯನಗರದಲ್ಲಿರು ಎಂಜಿಎಫ್ ಕಾಲೋನಿಯ ರಾಘವೇಂದ್ರ ಮಠದ ಪರಿಮಳ ಮಂಟಪದಲ್ಲಿ ನಡೆಯಲಿದೆ.
ಕೆಳದ ಕೆಲವು ವರ್ಷಗಳಿಂದ ಧರ್ಮಸ್ಥಳ ಶ್ರೀ ಕ್ಷೇತ್ರದ ಮೇಲಿನ ದಾಳಯ ಷಡ್ಯಂತ್ರದ ವಿರುದ್ಧ ಈ ಜನಜಾಗೃತಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಜಗದ್ಗುರು ವೀರಶೈವ ಲಿಂಗಾಯುತ ಪಂಚಮ ಸಾಲಿ ಜಗದ್ಗುರು ಪೀಠ ಹರಿಹರದ ಶ್ರೀ ವಚನಾನಂದ ಸ್ವಾಮೀಜಿ, ಯುವ ಬ್ರಿಗೇಡ್ ಸಂಸ್ಥಾಪಕರು ಹಾಗೂ ಚಿಂತಕರು ಚಕತ್ರವರ್ತಿ ಸೂಲಿಬೆಲೆ, ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿಗಳಾದ ಅರುಣ್ ಶ್ಯಾಮ್ ಹಾಗೂ ಸಾಮಾಜಿಕ ಕಾರ್ಯಕರ್ತ ವಸಂತ ಗಿಳಿಯಾರ್ ಭಾಗಿಯಾಗಲಿದ್ದಾರೆ.













