
ಚಿಕ್ಕಮಗಳೂರು: ಸರಕಾರಿ ಬಸ್ಸಿಗೆ ಡಿಕ್ಕಿ ಹೊಡೆದು ರಾಷ್ಟ್ರ ಪಕ್ಷಿ ನವಿಲು ಸಾವನ್ನಪ್ಪಿರುವ ಘಟನೆ ಕಡೂರು ತಾಲೂಕಿನ ಮಚ್ಚೇರಿ ಬಳಿ ಶನಿವಾರ (ಜು.12) ಸಂಭವಿಸಿದೆ.
ಕಡೂರಿನಿಂದ ಬೆಂಗಳೂರಿಗೆ ಹೊರಟಿದ್ದ ಸರಕಾರಿ ಬಸ್ಸಿಗೆ ನವಿಲು ಏಕಾಏಕಿ ಅಡ್ಡ ಬಂದಿದೆ ಕೂಡಲೇ ಚಾಲಕ ಎಚ್ಚೆತ್ತು ಬ್ರೇಕ್ ಹಾಕಿದ್ದಾರೆ ಆದರೆ ನವಿಲು ಬಸ್ಸಿನ ಎದುರಿನ ಗಾಜಿಗೆ ಬಡಿದು ಸಾವನ್ನಪ್ಪಿದೆ.













