ನವಭಾರತ್ ಯುವಕ ಸಂಘ ರಿ. ಅನಂತಾಡಿ ಇದರ ನೂತನ ಅಧ್ಯಕ್ಷರಾಗಿ ಯೋಗೀಶ್ ಪೂಂಜಾವು ಆಯ್ಕೆ – ಕಹಳೆ ನ್ಯೂಸ್

ವಿಟ್ಲ : ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ನವಭಾರತ್ ಯುವಕ ಸಂಘ (ರಿ) ಅನಂತಾಡಿ ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಗೌರವಧ್ಯಕ್ಷರಾದ ಜಗನ್ನಾಥ ಅಶ್ವತಾಡಿ ಮತ್ತು ಹರಿನಾಕ್ಷ ಪಡಿಪಿರೆ ಇವರ ಉಪಸ್ಥಿಯಲ್ಲಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಅನಿಶ್ ಅಶ್ವತಡಿ 12 ಸದಸ್ಯರ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆಯನ್ನು ಪ್ರಕಟಿಸಿದರು.
ಅಧ್ಯಕ್ಷರಾಗಿ ಯೋಗೀಶ್ ಪೂಂಜಾವು, ಉಪಾಧ್ಯಕ್ಷರಾಗಿ ರಮೇಶ್ ಕುಪ್ರಿಮಾರ್, ಪ್ರವೀಣ್ ಕೊಂಗಲಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಚರಣ್ ಜೆ , ಜತೆ ಕಾರ್ಯದರ್ಶಿಯಾಗಿ ಕೃತಿಕ್ ಅಶ್ವತಡಿ, ಕೋಶಾಧಿಕಾರಿಯಾಗಿ ಮನೋಹರ್ ಎ, ಕ್ರೀಡಾ ನಿರ್ದೇಶಕರಾಗಿ ನಿತಿನ್ ಕೊಂಗಲಾಯಿ, ಜಿತೇಶ್ ಕೆ. ಸಾಂಸ್ಕೃತಿಕ ನಿರ್ದೇಶಕರಾಗಿ ಯತೀಶ್ ಪೂಂಜಾವು ಪ್ರಚಾರ ನಿರ್ದೇಶಕರಾಗಿ ಮೋಹಿತ್ ಅಶ್ವತಾಡಿ, ಕೀರ್ಥನ್ ಅಶ್ವತಾಡಿ ಆರೋಗ್ಯ ನಿರ್ದೇಶಕರಾಗಿ ತೀರ್ಥಶ್ ಅಶ್ವತಾಡಿ, ಸಮಾಜ ಸೇವಾ ನಿರ್ದೇಶಕರಾಗಿ ನವೀನ್ ಪೂಂಜಾವು, ಸಲಹೆಗರರಾಗಿ ನಿಕಟಪೂರ್ವ ಅಧ್ಯಕ್ಷರುಗಳಾದ ಅನಿಶ್ ಅಶ್ವತಾಡಿ, ಅಶೋಕ್ ಅಶ್ವತಾಡಿ, ರಂಜಿತ್ ಪಡಿಪ್ಪಿರೆ, ಪವನ್ ಹಿರ್ಥ0ದಬೈಲು, ಆಯ್ಕೆಯಾಗಿದ್ದಾರೆ.
ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣವು ಜು. 13 ರಂದು ನಡೆಯಲಿದೆ ಎಂದು ನವಭಾರತ್ ಯುವಕ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಅನಿಶ್ ಅಶ್ವತಡಿ ತಿಳಿಸಿದರು.














