
ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ವಿಟ್ಲ ತಾಲೂಕಿನ ಸ್ವಯಂ ಸೇವಕರ ತರಬೇತಿ ಕಾರ್ಯಗಾರವನ್ನು ಶ್ರೀ ರತ್ನ ಕುಮಾರ್ ಪೋಲೀಸ್ ಉಪ ನಿರೀಕ್ಷಕರು, ಆರಕ್ಷಕ ಠಾಣೆ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ NDRF INSPECTOR ಶ್ರೀ ಶಾಂತಿ ಲಾಲ್ ಜಟಿಯಾ,ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ ಪಾಯಸ್ , ಜಿಲ್ಲಾ ನಿರ್ದೇಶಕರಾದ ಶ್ರೀ ಬಾಬು ನಾಯ್ಕ , ಯೋಜನಾಧಿಕಾರಿಗಳಾದ ಜೈವಂತ್ ಪಟಗಾರ, ಗಣೇಶ್ ಆಚಾರ್ಯ, ಸುರೇಶ್ ಗೌಡ, ಶೌರ್ಯ ಸಮಿತಿ ಮಾಸ್ಟರ್ ಸುರೇಶ್ ಉಪಸ್ಥಿತರಿದ್ದರು
ತರಬೇತಿ ಕಾರ್ಯಗಾರದಲ್ಲಿ ವಿಟ್ಲ ತಾಲೂಕಿನ 8 ಘಟಕಗಳ ಸಂಯೋಜಕರು, ಘಟಕ ಪ್ರತಿನಿಧಿಗಳು, ಸ್ವಯಂ ಸೇವಕರು ಭಾಗವಹಿಸಿದ್ದರು













