ಬಾನೆತ್ತರದಲ್ಲಿ ಹಾರಾಡುತ್ತಿರುವ ಹರಿದ ರಾಷ್ಟ್ರಧ್ವಜ : ಅಧಿಕಾರಿಗಳೇ ಎಲ್ಲಿದ್ದಿರಾ.? ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಆಕ್ರೋಶ-ಕಹಳೆ ನ್ಯೂಸ್

ಮಂಗಳೂರು : ವಿರೂಪಗೊಂಡ ಸ್ಥಿತಿಯಲ್ಲಿರುವ ರಾಷ್ಟ್ರಧ್ವಜ ಹಾರಾಡುತ್ತಿದ್ದರೂ ಸಹ ಅಧಿಕಾರಿಗಳು ನೋಡಿದರೂ ಸಹ ನೋಡದಂತೆ ವರ್ತಿಸುತ್ತಿರುವ ಸನ್ನಿವೇಶ ಮಂಗಳೂರಿನಲ್ಲಿ ನಡೆದಿದೆ.
ಇಲ್ಲಿನ ನಿವಾಸಿಗಳು ಇದರ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳ ಬಗ್ಗೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕಾನೂನಿನಂತೆ ವಿರೂಪಗೊಳಿಸಿದ, ಹರಿದ, ಸುಟ್ಟಿರುವ, ಬಣ್ಣ ಮಾಸಿರುವ ಅಥವಾ ಬೇರೆ ಬಣ್ಣ ಸೇರಿರುವ ಧ್ವಜವನ್ನು ಹಾರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದನ್ನು ರಾಷ್ಟ್ರಧ್ವಜ ಹಾಗೂ ದೇಶಕ್ಕೆ ಬಗೆಯುವ ಅಪಮಾನವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ಧ್ವಜ ಹರಿದಿದ್ದರೂ ಸಹ ಬದಲಾಯಿಸಿದ ಅಧಿಕಾರಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.













