
ಪುತ್ತೂರು: ಸಾಮಾಜಿಕ ಮಾಧ್ಯಮದಲ್ಲಿ ಬಂದ ಜಾಹೀರಾತು ನಂಬಿ ಅಧಿಕ ಹಣ ಗಳಿಸುವ ಆಸೆಯಿಂದ ಟ್ರೇಡಿಂಗ್ ಇನ್ವೆಸ್ಟ್ಮೆಂಟ್ಗೆ ಮುಂದಾದ ಪುತ್ತೂರಿನ ಬನ್ನೂರು ನಿವಾಸಿ ಯುವತಿ ₹ 4.90 ಲಕ್ಷವನ್ನು ಅಪರಿಚಿತರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಂತಹಂತವಾಗಿ ವರ್ಗಾಯಿಸಿ ವಂಚನೆಗೊಳಗಾಗಿದ್ದಾರೆ.
ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಷ್ಟೆಲ್ಲಾ ಹಣ ವರ್ಗಾವಣೆ ಮಾಡಿದ ಬಳಿಕವೂ ತನ್ನ ಬ್ಯಾಂಕ್ ಖಾತೆಗೆ ಹಣ ಬಾರದೆ ಇದ್ದಾಗ ಮೋಸದ ಅರಿವಾಗಿ ದೂರು ನೀಡಿದ್ದಾರೆ.














