ವಿಹಿಂಪ ಪುತ್ತೂರು ನಗರ ಮತ್ತು ಗ್ರಾಮಾಂತರ ಪ್ರಖಂಡ ವತಿಯಿಂದ ಮಾ.31ರಂದು (ನಾಳೆ) ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಮಧೇನು ಗೋಶಾಲೆಗೆ ಗೋವಿಗಾಗಿ ಮೇವು ಕಾರ್ಯಕ್ರಮ – ಕಹಳೆ ನ್ಯೂಸ್

ವಿಶ್ವ ಹಿಂದು ಪರಿಷದ್ ಬಜರಂಗದಳ ಪುತ್ತೂರು ನಗರ ಮತ್ತು ಗ್ರಾಮಾಂತರ ಪ್ರಖಂಡ ವತಿಯಿಂದ ಮಾ.31ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಮಧೇನು ಗೋಶಾಲೆಗೆ ಗೋವಿಗಾಗಿ ಮೇವು ಕಾರ್ಯಕ್ರಮ ನಡೆಯಲಿದೆ.
ವಿಶ್ವ ಹಿಂದು ಪರಿಷತ್, ಬಜರಂಗದಳದ ಘಟಕಗಳಿಂದ ಸಂಗ್ರಹಿಸಿದ ಮೇವುಗಳನ್ನು ದರ್ಬೆ ಅಶ್ವಿನಿ ಸರ್ಕಲ್ ನಿಂದ ಮೆರವಣಿಗೆ ಮೂಲಕ ಕಾಮಧೇನು ಗೋಶಾಲೆಗೆ ತಲುಪಿಸಲಾಗುತ್ತದೆ.
ದಾನಿಗಳು ಬೈಹುಲ್ಲು ಮೇವು ನೀಡುವುದಿದ್ದಲ್ಲಿ ಜಯಂತ ಕುಂಜೂರುಪಂಜ 9741480664 ಹಾಗೂ ಶ್ರೀಧರ ತೆಂಕಿಲ 9740462429 ಇವರನ್ನು ಸಂಪರ್ಕಿಸ ಬಹುದಾಗಿದೆ.














