
ಉಡುಪಿ : ದೇವರ ಸ್ಥಾನ ದಲ್ಲಿ ಇರುವ ಗುರು ವೃಂದ, ಮುಗ್ದ ರಾದ ವಿದ್ಯಾರ್ಥಿಗಳಿಗೆ ಮುಕ್ತ ರಾಗಿ ಎಲ್ಲಾವನ್ನು ದಾರೆಯೆರೆದಾಗ ಈ ಸಮಾಜಕ್ಕೆ ಅಮೂಲ್ಯ ಕಾಣಿಕೆಗಳನ್ನು ನೀಡಬಹುದು.
ಶಿಲ್ಪಾಕಾರನ್ನು ಕಲ್ಲಿನಿಂದ ಮೂರ್ತಿ ಕೆತ್ತಿ ಪೂಜಾಣಿಯ ಮಾಡುವಂತೆ ಗುರುಗಳು ವಿದ್ಯಾರ್ಥಿ ಗಳನ್ನು ಕೆತ್ತಿ ಅವರ ಉಜ್ವಲ ಭವಿಷ್ಯ ನಿರ್ಮಾಣ ಮಾಡಬೇಕು ಎಂದು ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜು (ಬೋರ್ಡ್ಹೈ ಸ್ಕೂಲ್ ) ಇಲ್ಲಿ ನಡೆದ ಕ್ರೀಡೋತ್ಸವ ಮತ್ತು ವಾರ್ಷಿಕೋತ್ಸವದ ಕಾರ್ಯಕ್ರಮದ ಅತಿಥಿಯಾಗಿ ದಿಕ್ಷುಚಿ ಭಾಷಣದಲ್ಲಿ ಶ್ರೀ ವಿಶ್ವನಾಥ ಕರಬ ಪ್ರಾಂಶುಪಾಲರು, ಸ.ಪ.ಪೂ. ಕಾಲೇಜು, ತೆಂಕನಿಡಿಯೂರು ಇವರು ನುಡಿದರು.
ಸುಮಾರು ೧೭ ಹೊರ ಜಿಲ್ಲೆಯ೬೦೦ಕ್ಕು ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಿಮ್ಮ ಭವಿಷ್ಯ ಕ್ಕಾಗಿ ನಿಮ್ಮ ತಂದೆ ತಾಯಿ ಗಳ ಪರಿಶ್ರಮ ಮತ್ತು ತ್ಯಾಗ ವನ್ನು ನೆನಪಿಸಿಕೊಳ್ಳಿ, ಅವರು ನಿತ್ಯ ಕೂಲಿ ಮಾಡಿ ನಿಮ್ಮ ಭವಿಷ್ಯ ಭಯಸುವ ಅವರ ಆಶೆ ನಿರಾಶೆ ಮಾಡಬೇಡಿ ಎಂದರು ನಗರಸಭಾ ಸದಸ್ಯರು, ಶಿರಿಬೀಡು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಯತ್ ಪಾಲ್ ಸುವರ್ಣಮಾನ್ಯ ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ, ಮುಖ್ಯ ಅತಿಥಿಗಳಾಗಿ ಶ್ರೀ. ಟಿ.ಜಿ. ಹೆಗ್ಡೆ ನಗರಸಭಾ ಸದಸ್ಯರು, ತಿರಿಬೀಡು ಶ್ರೀ ಮಾರುತಿ ಉಪನಿರ್ದೇಶಕರು, ಪ.ಪೂ.ಶಿ ಇಲಾಖೆ ಉಡುಪಿ ಜಿಲ್ಲೆ ಶ್ರೀಮತಿ ಡಾ। ಯಲ್ಲಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಡುಪಿ ಶ್ರೀ ಅನಂತರಾಮ ಬಲ್ಲಾಳ್ ಉಪಾಧ್ಯಕ್ಷರು, ಕಾಲೇಜು ಅಭಿವೃದ್ಧಿ ಸಮಿತಿ ಶ್ರೀ ವಿಠಲ ಶೆಟ್ಟಿ ಉಪಾಧ್ಯಕ್ಷರು, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಶ್ರೀ ಸಂತೋಷ್ ಶೆಟ್ಟಿಗಾರ್ ಅಧ್ಯಕ್ಷರು, ಪೋಷಕರ ಶೈಕ್ಷಣಿಕ ಸಮಿತಿ ಇವರು ಅತಿಥಿ ಗಳಾಗಿ ಉಪಸ್ಥಿತರಿದ್ದರು.














