ಸಂತ ಫಿಲೋಮಿನಾ ಕಾಲೇಜಿನಲ್ಲಿ ಕನ್ನಡರಾಜ್ಯೋತ್ಸವದ ಅಂಗವಾಗಿ ಕನ್ನಡ ನಾಡು ನುಡಿಚಿಂತನೆ ಕಾರ್ಯಕ್ರಮ
ಸಂತ ಫಿಲೋಮಿನಾಕಾಲೇಜಿನಲ್ಲಿ ಕನ್ನಡರಾಜ್ಯೋತ್ಸವದ ಅಂಗವಾಗಿ ಕನ್ನಡ ನಾಡು ನುಡಿಚಿಂತನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಕನ್ನಡಿಗರಾದ ನಮಗೆ ಕನ್ನಡ ಭಾಷೆಯ ಪ್ರಜ್ಞೆ ಮುಖ್ಯ.ಕನ್ನಡ ನಾಡು - ನುಡಿಯಕುರಿತುಅಭಿಮಾನ ಮುಖ್ಯ. ಎಲ್ಲ ಸದ್ವಿಚಾರ ಸ್ವೀಕರಿಸುವ ಮನೋವೃತ್ತಿಯವರಾಗಿರುವ ನಾವು ಕನ್ನಡ ಉಳಿಸಬೇಕು ಎನ್ನುವ ಉದ್ದೇಶದಿಂದ ಅನ್ಯ ಭಾಷೆ–ದ್ವೇಷಿಸಬಾರದು. ಭಾಷೆಯ ಉಳಿವಿಗಾಗಿ ನಾವು ಪ್ರಯತ್ನಿಸಬೇಕು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯಎಂದು ಸಂತ ಫಿಲೋಮಿನಾ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಬಸ್ತ್ಯಾಂ ಪಾಯಸ್ ಹೇಳಿದರು.ಕಾಲೇಜಿನ ಕನ್ನಡ ವಿಭಾಗ,...