


ದೀಪಾವಳಿ ಹಬ್ಬದಂದು ವಿಶೇಷವಾಗಿ ಗೋವಿನ ಪೂಜೆ ಮಾಡಲಾಗುತ್ತದೆ. ಸನಾತನ ಧರ್ಮದಲ್ಲಿ ಗೋವಿಗೆ ವಿಶೇಷ ಸ್ಥಾನವಿದೆ ಹಾಗೂ ಮುಕೋಟಿ ದೇವತೆಗಳು ಗೋವಿನಲ್ಲಿ ಅಡಕವಾಗಿರುತ್ತಾರೆ ಎಂಬ ನಂಬಿಕೆಯಿದೆ. ಅಂತೆಯೇ ಹಲವಾರು ಸಮಾಜ ಸೇವೆ ಮಾಡಿ ಇಡೀ ಊರಿನ ಜನರ ಮನಸ್ಸು ಗೆದ್ದಿರುವ ವಿಶ್ವಹಿಂದೂಪರಿಷದ್ ಬಜರಂಗದಳ ಮಾತೃ ಮಂಡಳಿ ದುರ್ಗಾವಾಹಿನಿ ಛತ್ರಪತಿ ಶಿವಾಜಿ ಶಾಖೆ ಕುಮ್ಡೇಲ್ ಘಟಕದ ವತಿಯಿಂದ ಗೋ ಪೂಜೆ ಕಾರ್ಯಕ್ರಮ ಭರತ್ ಕುಮುಡೆಲ್ ಇವರ ಮನೆಯಲ್ಲಿ ನಡೆಯಿತು.














